ಶ್ರೀ ಪರಮೇಶ್ವರಿ ಆರ್ಟ್ಸ್ ಲಾಂಛನದಲ್ಲಿ ವೈ.ಶ್ರೀನಿವಾಸ ಹಾಗೂ ಡಿ.ಬಿ. ಕುಮಾರಸ್ವಾಮಿ ನಿರ್ಮಿಸಿರುವ ಉಷಾನವರತ್ನರಾಮ್ ರವರ ಕಾದಂಬರಿ ಆಧಾರಿತ ತರಂಗಿಣಿ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಸರ್ಟಿಫಿಕೇಟ್ ನೀಡೀದೆ. ಶ್ರೀನಿವಾಸ ಕೌಶಿಕ್ ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಗೇಶ ಆಚಾರ್ಯ ಛಾಯಾಗ್ರಹಣ, ಮಾರುತಿ ಮಿರರ್ಕರ್ ಸಂಗೀತ, ಎಂ. ಸಂಜೀವ ರೆಡ್ಡಿ ಸಂಕಲನ, ವಿ.ವಿ. ಗೋಪಾಲ್ ರವರ ಸಾಹಿತ್ಯ, ಕಪಾಲಿ ನಿರ್ಮಾಣ ನಿರ್ವಹಣೆ ಇರುವ ಚಿತ್ರದ ತಾರಾಬಳಗದಲ್ಲಿ ಮೋಹನ್ ಬಿ. ಸಿ. ಪಾಟೀಲ್, ತೇಜಸ್ವಿನಿ, ಶೋಭರಾಜ್, ಶ್ರೀನಿವಾಸಮೂರ್ತಿ, ದತ್ತಣ್ಣ, ಕೃಷ್ಣೇಗೌಡ, ಜಯಶ್ರೀ, ಎಂ.ಡಿ. ಕೌಶಿಕ್, ವೀಣಾ ಸುಂದರ್, ಆಡಿಟರ್ ಶ್ರೀನಿವಾಸ್,ಕೆ.ಎಸ್. ರವೀಂದ್ರನಾಥ್ ಮೊದಲಾದವರು ಅಭಿನಯಿಸಿದ್ದಾರೆ.